ಯಮಕನಮರಡಿ ಪ್ರಕರಣಕ್ಕೆ ರಾಜಕೀಯ ಬಣ್ಣ: “ಆರೋಪ ಮಾಡುವವರು ಖಾಲಿ ಇದ್ದಾರೆ” ಬಿಜೆಪಿಗೆ ಟಾಂಗ್ ಕೊಟ್ಟ ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: ಯಮಕನಮರಡಿಯಲ್ಲಿ ಸ್ವಾಮೀಜಿಯವರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಡುತ್ತಿರುವ ಆರೋಪಗಳಿಗೆ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಚುನಾವಣೆ ಹತ್ತಿರ ಬರುತ್ತಿದ್ದಂತೆ ಈಗ ಇದೊಂದು ಹೊಸ ರಾಜಕೀಯ ಆರಂಭವಾಗಿದೆ. ಎಮ್ಮಿ, ನಾಯಿ ಸತ್ತರೂ ನಮ್ಮ ಮೇಲೆಯೇ ಆರೋಪ ಹೊರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಲೇವಡಿ ಮಾಡಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಮುಂದಿಟ್ಟುಕೊಂಡು ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಬಿಂಬಿಸುತ್ತಿರುವ […]

ಮತ್ತಷ್ಟು ಓದಿ..

ಬೆಳಗಾವಿಯಲ್ಲಿ ಆರ್.ಎಸ್.ಎಸ್ ರಾಷ್ಟ್ರೀಯ ಬೈಠಕ್: ಮೋಹನ್ ಭಾಗವತ್ ನೇತೃತ್ವದಲ್ಲಿ ಮೂರು ದಿನಗಳ ಕಾಲ ಶಕ್ತಿಪ್ರದರ್ಶನ!

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕುರಿತು ಬರೆದ ಪತ್ರ ತೀವ್ರ ವಿವಾದ ಹಾಗೂ ಚರ್ಚೆಗಳಿಗೆ ಗ್ರಾಸವಾಗಿರುವ ಬೆನ್ನಲ್ಲೇ, ಕುಂದಾನಗರಿ ಬೆಳಗಾವಿಯಲ್ಲಿ ಆರೆಸ್ಸೆಸ್ ಬೃಹತ್ ರಾಷ್ಟ್ರೀಯ ಬೈಠಕ್ ಆಯೋಜಿಸುವ ಮೂಲಕ ತೀವ್ರ ಕುತೂಹಲ ಮೂಡಿಸಿದೆ. ಜುಲೈ ತಿಂಗಳಿನಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಸಭೆಯು ಸಂಘಟನೆಯ ಶಕ್ತಿಪ್ರದರ್ಶನ ಎಂದೇ ವಿಶ್ಲೇಷಿಸಲಾಗುತ್ತಿದೆ.‌ ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರ ನೇತೃತ್ವದಲ್ಲೇ ಈ ಮಹತ್ವದ ಬೈಠಕ್ ನಡೆಯುತ್ತಿರುವುದು ವಿಶೇಷ ಮಹತ್ವ […]

ಮತ್ತಷ್ಟು ಓದಿ..

ಶನಿ ಮಹಾತ್ಮನ ಕೃಪೆಯಿಂದ ಇಂದು ಯಾರಿಗೆಲ್ಲಾ ಅದೃಷ್ಟ? ಇಲ್ಲಿದೆ ಜುಲೈ 4ರ ನಿತ್ಯ ಪಂಚಾಂಗ ಮತ್ತು ರಾಶಿಫಲ!

ಶುಭೋದಯ ಓದುಗರೇ, ಇಂದು ಶನಿವಾರ, 04 ಜುಲೈ 2026. ಇಂದಿನ ದಿನದ ಶುಭ-ಅಶುಭ ಮುಹೂರ್ತಗಳು, ಗ್ರಹಗತಿಗಳು ಹಾಗೂ ನಿಮ್ಮ ರಾಶಿಯ ಇಂದಿನ ಭವಿಷ್ಯದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ☀️ ಇಂದಿನ ನಿತ್ಯ ಪಂಚಾಂಗ ಹಾಗೂ ಖಗೋಳ ಸಮಯ ಸೂರ್ಯೋದಯ (Sunrise) ಬೆಳಗ್ಗೆ 06:02 ಕ್ಕೆ ಸೂರ್ಯಾಸ್ತ (Sunset) ಸಂಜೆ 06:48 ಕ್ಕೆ ಚಂದ್ರೋದಯ (Moonrise) ರಾತ್ರಿ 09:45 ಕ್ಕೆ ಚಂದ್ರಾಸ್ತ (Moonset) ಮರುದಿನ ಬೆಳಗ್ಗೆ 08:32 ಕ್ಕೆ ಅಯನ / ಋತು ದಕ್ಷಿಣಾಯನ / ವರ್ಷ ಋತು […]

ಮತ್ತಷ್ಟು ಓದಿ..

ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ₹4.96 ಲಕ್ಷ ಮೌಲ್ಯದ ಹೆರಾಯಿನ್ ಜಪ್ತಿ, ಇಬ್ಬರು ಆರೋಪಿಗಳ ಬಂಧನ!

ಬೆಳಗಾವಿ: ನಗರದಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟ ಜಾಲದ ವಿರುದ್ಧ ಬೆಳಗಾವಿ ನಗರ ಸಿಸಿಬಿ (CCB) ಪೊಲೀಸರು ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಹೆರಾಯಿನ್ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅವರಿಂದ ಸುಮಾರು 4.96 ಲಕ್ಷ ರೂಪಾಯಿ ಮೌಲ್ಯದ ಹೆರಾಯಿನ್ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿವರ:ಬಂಧಿತ ಆರೋಪಿಗಳನ್ನು ಬೆಳಗಾವಿಯ ಕಂಗ್ರಾಳಿ ಕೆ.ಎಚ್‌.ನ ಮಹಾದ್ವಾರ ರೋಡ್, ಪಾಟೀಲ ಗಲ್ಲಿ ನಿವಾಸಿ ಮಹಾದೇವ ಗಜಾನನ ಪಾಟೀಲ ಮತ್ತು ರಾಮದೇವ ಗಲ್ಲಿ ನಿವಾಸಿ ವಿನಾಯಕ […]

ಮತ್ತಷ್ಟು ಓದಿ..

ಬೆಳಗಾವಿ ಜಿಲ್ಲಾ ಪೊಲೀಸರ ಬಿಗ್ ಸಕ್ಸಸ್: ಹತ್ತು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 12 ಜನರನ್ನು ಪತ್ತೆ ಹಚ್ಚಿದ ‘ಎಐ’ ತಂತ್ರಜ್ಞಾನ!

ಬೆಳಗಾವಿ: ಕಾಲ ಬದಲಾದಂತೆ ಅಪರಾಧ ಜಗತ್ತನ್ನು ಮಟ್ಟಹಾಕಲು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ತಂತ್ರಜ್ಞಾನದ ಬಳಕೆ ಅನಿವಾರ್ಯವಾಗಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂಬಂತೆ, ಬೆಳಗಾವಿ ಜಿಲ್ಲಾ ಪೊಲೀಸರು ವಿನೂತನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನವನ್ನು ಬಳಸಿಕೊಂಡು ದಶಕದ ಹಿಂದೆ ನಾಪತ್ತೆಯಾಗಿದ್ದ ಬರೋಬ್ಬರಿ 12 ಜನರನ್ನು ಪತ್ತೆ ಹಚ್ಚಿ, ಅವರ ಕುಟುಂಬದೊಂದಿಗೆ ಮರುಸಂಘಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ‘ನ್ಯಾಟ್‌ಗ್ರೇಡ್’ ಅಪ್ಲಿಕೇಶನ್ ಚಮತ್ಕಾರ: ಕಾಣೆಯಾದವರನ್ನು ಹುಡುಕಲು ಪೊಲೀಸರು ಈ ಬಾರಿ ಬಳಸಿದ್ದು ನ್ಯಾಟ್‌ಗ್ರೇಡ್ (NATGRID) ಎಂಬ ಅತ್ಯಾಧುನಿಕ ಎಐ ಅಪ್ಲಿಕೇಶನ್. ಈ ತಂತ್ರಜ್ಞಾನದ […]

ಮತ್ತಷ್ಟು ಓದಿ..

ಇಂದು ಸಂಕಷ್ಟಹರ ಚತುರ್ಥಿ; ನಿಮ್ಮ ರಾಶಿಗೆ ಶುಭ ಯೋಗವಿದೆಯೇ? ಇಂದಿನ ಪಂಚಾಂಗ, ರಾಶಿ ಭವಿಷ್ಯ ಹೇಗಿದೆ!

ನಮಸ್ಕಾರ ವೀಕ್ಷಕರೇ,ಇಂದು ಶುಕ್ರವಾರ, ಜುಲೈ 03, 2026. ಇಂದು ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿ. ಇಂದಿನ ವಿಶೇಷವೆಂದರೆ ಸಂಕಷ್ಟಹರ ಚತುರ್ಥಿ. ವಿಘ್ನನಿವಾರಕನಾದ ಗಣಪತಿಯ ಆರಾಧನೆಯಿಂದ ಇಂದಿನ ದಿನವನ್ನು ಆರಂಭಿಸಿದರೆ ಎಲ್ಲಾ ಕಾರ್ಯಗಳೂ ನಿರ್ವಿಘ್ನವಾಗಿ ನೆರವೇರುತ್ತವೆ. ಹಾಗಾದರೆ ಇಂದಿನ ದಿನದ ಪಂಚಾಂಗ ಮಾಹಿತಿ ಹಾಗೂ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ತಿಳಿಯೋಣ. ಇಂದಿನ ನಿತ್ಯ ಪಂಚಾಂಗ ಮತ್ತು ಕಾಲಗಳು ಶುಭ ಹಾಗೂ ಅಶುಭ ಕಾಲಗಳು: ಬ್ರಹ್ಮ ಮುಹೂರ್ತ ಬೆಳಿಗ್ಗೆ 04:25 ರಿಂದ 05:13 ಅಭಿಜಿತ್ ಮುಹೂರ್ತ […]

ಮತ್ತಷ್ಟು ಓದಿ..

ನಗರ ಸ್ಥಳೀಯ ಸಂಸ್ಥೆಗಳಿಗೆ 15ನೇ ಹಣಕಾಸು ಆಯೋಗದ ₹887 ಕೋಟಿ ಅನುದಾನ ಬಿಡುಗಡೆಗೆ ಕೇಂದ್ರ ಸಚಿವರಿಗೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮನವಿ

ಬೆಂಗಳೂರು: ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಗುರುವಾರ ಬೆಂಗಳೂರಿಗೆ ಆಗಮಿಸಿರುವ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ ತೋಖನ್ ಸಾಹು ಅವರನ್ನು ಕುಮಾರಕೃಪ ಅತಿಥಿಗೃದಲ್ಲಿ ಭೇಟಿ ಮಾಡಿ, ಕರ್ನಾಟಕದ ಅರ್ಹ ನಗರಾಭಿವೃದ್ಧಿ ಸಂಸ್ಥೆಗಳಿಗೆ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ) 2025-26ನೇ ಹಣಕಾಸು ವರ್ಷಕ್ಕೆ 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿರುವ ₹887 ಕೋಟಿ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. 15ನೇ ಹಣಕಾಸು ಆಯೋಗದ ನಿಯಮಾವಳಿಗಳ ಪ್ರಕಾರ […]

ಮತ್ತಷ್ಟು ಓದಿ..

ವಿಧಾನಸೌಧದಲ್ಲಿ ನಗರಾಭಿವೃದ್ಧಿ ಸಚಿವರ ಸಚಿವಾಲಯದ ಕಚೇರಿ ಉದ್ಘಾಟನೆ

ಬೆಂಗಳೂರು, ಜು. 2: ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದಲ್ಲಿನ ಸಚಿವಾಲಯದ ತಮ್ಮ ನೂತನ ಕಚೇರಿಯನ್ನು ಉದ್ಘಾಟಿಸಿದರು. ಬಳಿಕ ಕಚೇರಿಗೆ ಆಗಮಿಸಿದ್ದ ಸಾರ್ವಜನಿಕರನ್ನು ಭೇಟಿ ಮಾಡಿ, ಅವರ ಅಹವಾಲುಗಳು ಹಾಗೂ ಮನವಿಗಳನ್ನು ಆಲಿಸಿದ ಸಚಿವರು, ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಜನಪರ, ಪಾರದರ್ಶಕ ಹಾಗೂ ಉತ್ತರದಾಯಿ ಆಡಳಿತಕ್ಕೆ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುವ ಸಂಕಲ್ಪವನ್ನು ಪುನರುಚ್ಚರಿಸಿದರು. ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ವಿಷಯಗಳಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ […]

ಮತ್ತಷ್ಟು ಓದಿ..

ಶತ್ರುತ್ವ ಮರೆತ ಮಮತೆ: ಶಿವಮೊಗ್ಗದಲ್ಲಿ ಬೆಕ್ಕಿನ ಮರಿಗೆ ಹಾಲುಣಿಸಿ ಮನುಷ್ಯನಿಗೆ ಪಾಠ ಕಲಿಸಿದ ಸಾಕು ನಾಯಿ!

ಶಿವಮೊಗ್ಗ: “ಬೆಕ್ಕು ಮತ್ತು ನಾಯಿ” ಎಂದರೆ ಜನ್ಮಜನ್ಮಾಂತರದ ವೈರತ್ವ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಪ್ರಕೃತಿಯ ನಿಯಮವನ್ನೇ ಮೀರಿ, ತನ್ನ ಬದ್ಧ ವೈರಿಯಾದ ಬೆಕ್ಕಿನ ಮರಿಗೆ ನಾಯಿಯೊಂದು ಹಾಲುಣಿಸುವ ಮೂಲಕ ತಾಯ್ತನದ ಮಮತೆಯನ್ನು ಉಣಬಡಿಸಿರುವ ಅಪರೂಪದ ಮತ್ತು ಮನಮಿಡಿಯುವ ಘಟನೆಯೊಂದು ಶಿವಮೊಗ್ಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ​ಅರಸಾಳು ಗ್ರಾಮದ ಅಪರೂಪದ ದೃಶ್ಯ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮದ ನಿವಾಸಿ ಬೋರಣ್ಣ ಎಂಬುವವರ ಮನೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ. ಬೋರಣ್ಣ ಅವರು ಸಾಕಿರುವ […]

ಮತ್ತಷ್ಟು ಓದಿ..

ಶಿವಮೊಗ್ಗದಲ್ಲಿ ಭೀಕರ ದುರಂತ: ಗಾಂಜಾ ದೂರು ನೀಡಲು ಹೊರಟಿದ್ದ ಅಜ್ಜಿಯ ಕೊಲೆ; ಹಲ್ಲೆ ನಡೆಸಿದ ಮೊಮ್ಮಗನ ಕಾಲಿಗೆ ಗುಂಡಿಕ್ಕಿದ ಪೊಲೀಸರು!

ಶಿವಮೊಗ್ಗ: ಗಾಂಜಾ ವ್ಯಸನದ ಕರಾಳ ಮುಖಕ್ಕೆ ಶಿವಮೊಗ್ಗ ನಗರ ಸಾಕ್ಷಿಯಾಗಿದ್ದು, ವ್ಯಸನದ ವಿರುದ್ಧ ದೂರು ನೀಡಲು ಹೊರಟಿದ್ದ ಹೆತ್ತ ಅಜ್ಜಿಯನ್ನೇ ಮೊಮ್ಮಗನೊಬ್ಬ ಸೈಜುಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಿಳಘಟ್ಟದ ಆನಂದರಾವ್ ಬಡಾವಣೆಯಲ್ಲಿ ನಡೆದಿದೆ. ಇತ್ತ ಅಜ್ಜಿಯನ್ನು ಕೊಂದ ಕಟುಕ ಮೊಮ್ಮಗನನ್ನು ಬಂಧಿಸಲು ಹೋದ ಪೊಲೀಸರ ಮೇಲೂ ಆತ ಚಾಕುವಿನಿಂದ ದಾಳಿ ನಡೆಸಿದ್ದು, ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಘಟನೆಯ ಹಿನ್ನೆಲೆ: ಗಾಂಜಾ ದೂರು ನೀಡಿದ್ದೇ ಮುಳುವಾಯ್ತು! ಶಿವಮೊಗ್ಗ ನಗರದ […]

ಮತ್ತಷ್ಟು ಓದಿ..